ಹಾಸನ: ನಗರದ ಸರ್ಕಾರಿ ನೌಕರರ ಭವನದಲ್ಲಿ 67ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಮ್. ಶ್ರೀನಿವಾಸ್ ನೆರವೇರಿಸಿದರು. ನಂತರ ರಾಷ್ಟ್ರಗೀತೆ ಹಾಡಿ ಗೌರವ ಸಲ್ಲಿಸಲಾಯಿತು. ಇದೆ ವೇಳೆ ಭಾರತದ ಸಂವಿಧಾನ 1950ರ ಜನವರಿ 26 ರಂದು ಜಾರಿಯಾದ ಬಗ್ಗೆ ಇದೆ ವೇಳೆ ನೆನಪಿಸಿಕೊಂಡರು. ನಂತರ ಸಹಿ ಹಂಚಲಾಯಿತು.ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಶಿವೇಗೌಡ, ಉದಯ್, ತಮ್ಮಯ್ಯ, ಗೌರವಾಧ್ಯಕ್ಷ ಸತೀಶ್, ನಿರ್ದೇಶಕರು ನೇತ್ರವತಿ, ಇಂದ್ರಕುಮಾರ್ ಇತರರು ಪಾಲ್ಗೊಂಡಿದ್ದರು.
No comments:
Post a Comment